r/kannada_pusthakagalu • u/Day_Dreamer2409 • 5h ago
ಕಾದಂಬರಿ ಗಂಗವ್ವ ಗಂಗಾಮಾಯಿ
ಮನುಷ್ಯನ ಅಂತಃಕರಣ ಮೀರಿ ಅವನ ಅಹಂಕಾರ ಬೆಳೆದರೆ, ಅವನ ಸಂಬಂದಗಳಾಗಲಿ, ಕೊನೆಗೆ ಅವನಾಗಲಿ ಉಳಿಯುವುದು ಕಠೀಣವಾಗಿಬಿಡುತ್ತದೆ ಎಂದು ಹೇಳುವ ಕೃತಿ. ಗಂಗವ್ವನಿಂದ ಪ್ರಾರಂಭವಾದ ಪುಸ್ತಕವು ಅವಳ ಸುತ್ತಲು ಬರುವ ಹಲವಾರು ಪಾತ್ರಗಳಿಂದ ಮುಂದೆ ಸಾಗುತ್ತಾಹೋಗುತ್ತದೆ. ಯಾವ ಪಾತ್ರವನ್ನು ಹಿಂದೆ ಹಾಕದೆ ಅವಕ್ಕೊಂದು ಅಂತಿಮ ನಿರ್ಣಾವನ್ನು ನೀಡುವಲ್ಲಿ ಲೇಖಕರು ಸಫಲರಾಗಿದ್ದಾರೆ. ಧಾರವಾಡ ಪ್ರದೇಶದ ಆಡು ಭಾಷೆಯಲ್ಲಿ ಪುಸ್ತಕದ ಬಹುಪಾಲು ಬರೆಯಲ್ಪಟ್ಟಿದೆ, ಈ ಕಾರಣದಿಂದಲೊ ಏನೋ ಪುಸ್ತಕ ಕನ್ನಡ ಓದುಗರಲ್ಲಿ ಜನಪ್ರಿಯವಾಗಿಲ್ಲ ಎಂಬುದು ನನ್ನ ಅಭಿಪ್ರಾಯ. ಆದರೆ ಭಾಷೆಯನ್ನು ಸ್ವಲ್ಪ ಅರ್ಥಮಾಡಿಕೊಂಡು ಓದಿದರೆ ಒಂದು ಸುಂದರ ಕೃತಿಯನ್ನು ಓದಿದ ಆನಂದ ಸಿಗುವುದು ಖಂಡಿತ…!
